ಗೋರಿಗಳ ನಡುವೆ


ಕಣ್ತೆರೆಯುತ್ತಲೆ ಕಣ್ಮುಚ್ಚಿದ ಕಂದಮ್ಮಗಳೇ
ಅರಳುತ್ತಲೆ ಉರಿದುಹೋದ ಅಕ್ಕಂದಿರೆ, ತಂಗಿಯರೇ
ಬದುಕುತ್ತಲೆ ಬೀದಿಪಾಲು-ತಾಯಂದಿರೆ, ತಂದೆಯರೇ
ಕರೆಯುತ್ತಲೆ ಕಮರಿಹೋದ ಗೋರಿ ಗೆಳೆಯರೇ

ನಡುವೆ ನಿಂತವನ
ಮನಸು ಚಿಂತೆವನ
ಉರಿಯುತ್ತಿದೆ ಕಾಡು
ಮುರಿಯುತ್ತಿದೆ ಮಾಡು

ಮನಸಿನ ಮಾತು
ಕಣ್ಣಲೆ ಹೂತು
ಅರಿವಾಗದು ಅಲ್ಲಿ
ಅದು ನೀರಿಲ್ಲದ ನಲ್ಲಿ.

ನಗವಿದ್ದರೆ, ನಗುವಿದ್ದರೆ
ಮುಗಿಬೀಳುವರಲ್ಲಿ.
ನಿಜ ಮುಚ್ಚುತ, ಹುಸಿ ಬಿಚ್ಚುತ
ಹಸಿವಾದರೂ ಹಸಿರಾಗುತ
ಅವರಿವರಿಗೆ ಉಸಿರಾದರೆ
ಹೆಸರಾಗುವುದಲ್ಲಿ
ಮನದಾಳವ ತೋಡಿದರೆ
ಕೆಸರಾಗುವುದಲ್ಲಿ
ಮೊರೆ ಹೊಕ್ಕೆನು ಇಲ್ಲಿ


ಗೋಡೆಗಳಾದರು ಕಂಬಗಳಾದರು
ಮಾತು ಮರೆಯುವ ಮೃಗಗಳಾದರು
ಸತು ಮುರಿಯುವ ತೋಳಗಳಾದರು
ಮನಸಿಗೆ ಮುಷ್ಟಿಯ ತೋಳುಗಳಾದರು.

ಬೆಳಕಿಗೆ ಬರಿದೆ ಕತ್ತಲ ಕೊರೆದೆ
ಮೀಟುವ ತಂತಿ ಮಿನುಗುವ ತಾರೆ-
ಕಾಣದೆ, ಕಡೆಗೆ ನಾನೇ ಕತ್ತಲು
ಕಣ್ಕಟ್ಟಿದ ವಿಷ-ಬಾಳಿನ ಕುಯಿಲು.


ಮನಸಿಲ್ಲವೆ ನಿಮಗಾದರು?
ದನಿಯಿಲ್ಲವೆ ನಿಜ-ಕಾದರು?
ನನ್ನೆದೆ ಬೆಳಕಿನ ಗೋರಿಗಳೆ
ಬಾಳಿನ ಬಯಲಿನ ಭೇರಿಗಳೆ.

ಅಳಲಿನ ಅನುಭವ ಆಳಕೆ ತಟ್ಟಿ
ಮನುಜತೆ ಮಾತು ಮೂಲಕ ಮುಟ್ಟಿ
ಕಲಕುವ ಅಲೆಗಳು, ಎದೆ ಮುಟ್ಟುವ ಮಜಲು
ಗೋರಿಗಳಾ ಒಡಲು-ಈಗಾಯಿತು ಕಡಲು.

ಗೋರಿಗೊರಳುಗಳು ಉಬ್ಬಿ ಬಂದವು
ಬೆಂದ ಮನಸನು ತಬ್ಬಿ ನಿಂದವು
ತೇವಗೊಳ್ಳುತ ತೇವಗೊಳಿಸುತ
ತೆರಳು ಎಂದವು ಬಾಳಿನ ಹರಿತಕೆ
ಮರಳು ಎಂದವು ಗೋಳಿನ ಇರಿತಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾವಣಗೆರೆ ಜಿಲ್ಲೆಯ ಕಥಾಸಾಹಿತ್ಯ
Next post ದುಬಾರಿ ಮುಗುಳು ನಗೆ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys